Monday, January 31, 2011

ನಮ್ಮೂರು ಮೈಸೂರು

ಚೆಲುವ ಕನ್ನಡ ನಾಡಲ್ಲಿರುವ ನಮ್ಮೂರು.
ಕಲೆ ಸಂಸ್ಕೃತಿಯ ತವರೂರು.
ಸಾರ್ಥಕತೆಯಿಂದ ಬದುಕುವರು ಇಲ್ಲಿಯ ಜನರು.
ಇದುವೇ ನಮ್ಮ ನಿಮ್ಮೆಲರ ನೆಚ್ಚಿನ ಮೈಸೂರು.

ಪ್ರವಾಸಿಗರ ಕಣ್ಮಣಿ ಇಲ್ಲಿನ ಅರಮನೆ,
ವಿಸ್ಮಯದಿಂದ ಕೂಡಿದೆ ಇದರ ಹಿನ್ನೆಲೆ,
ವೊಡೆಯರರ ರಾಜವೈಭವಕ್ಕೆ ಹಿಡಿದ ಕನ್ನಡಿ ಈ ನೈದಿಲೆ,
ನಮಗಂತೂ ಇದು ಸ್ಪೂರ್ತಿಯ ಸೆಲೆ.

ಪಕ್ಕದಲ್ಲೇ ಇದೆ ದೇವರಾಜ ಮಾರುಕಟ್ಟೆ.
ನೋಡಲು ಮರೆಯದಿರಿ ಕನ್ನಂಬಾಡಿ ಕಟ್ಟೆ.
ವಿಶ್ವೇಶ್ವರಯ್ಯನವರಿಗೆ ಧನ್ಯವಾದಗಳು ಇದನ್ನ ಕಟ್ಟಿದ್ದಕ್ಕೆ.
ಬೂರಾದರೆ ಇದೆ ಅರಸ್ ರೋಡ್ನಲ್ಲಿ ಕಾಫಿ ಡೇ ಹರಟೆ ಹೊಡಿಯಲಿಕ್ಕೆ

ತಪ್ಪದೆ ನೋಡಿ ಜಗನ್ಮೋಹನ ಆರ್ಟ್ ಗ್ಯಾಲರಿ.
ಟೈಮ್ ಇದ್ದರೆ ಹೋಗಿ ಬಲಮುರಿ ಎಡಮುರಿ.
ಚಾಟ್ ಸ್ತ್ರೀಟ್ ನಲ್ಲಿ ಸವಿಯಿರಿ ಖಾರಾ ಚುರುಮುರಿ.
ಕುವೆಂಪು ಅವರಿಂದ ನಾಮಕರಣಗೊಂಡಿದೆ ಇಲ್ಲಿನ ಮಾನಸಗಂಗೋತ್ರಿ.

ನಗುನಗುತ್ತಾ ನಿಂತಿಹಳು ತಾಯಿ ಚಾಮುಂಡಿ ಬೆಟ್ಟದ ಮೇಲೆ.
ಆಕೆಯ ಆಶಿರ್ವಾದ ನಮಗೆ ಸದಾ ಆಸರೆ.
ಮೈಸೂರ ಜನರಲ್ಲಿ ಭೂರ್ಗರೆಯುವುದು ಏನನ್ನೂ ಬಯಸದ ಅಕ್ಕರೆ.
ಅದನ್ನು ಅನುಭವಿಸುವುದು ಕುಡಿದಂತೆ ಹಾಲು-ಸಕ್ಕರೆ.

ಎಲ್ಲಾದರೂ ಇರು,ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು.ಕನ್ನಡಿಗ ಎಂದು ಹೆಮ್ಮೆ ಇಂದ ಹೇಳು.
ನಿರಂತರ ವಿಜ್ರುಂಭಿಸಲಿ ನಮ್ಮ ಚೆಲುವ ಕನ್ನಡ ನಾಡು.
ಅದಕ್ಕೆ ಮುಕುಟಧಾರೆಯಾಗಿರಲಿ ನಮ್ಮ ನೆಚ್ಚಿನ ಮೈಸೂರು.

No comments:

Post a Comment